ಕಳೆದ ಭಾನುವಾರ  ೧೭-೦೨ ೨೦೦೩ ರಂದು ಬೆಂಗಳೂರಿನ  ರವಿಂದ್ರ ಕಲಾಕ್ಷೇತ್ರದಲ್ಲಿ ಆತ್ಮೀಯ ಗೆಳೆಯ ಶ್ರೀ ಮಣಿಕಾಂತ್ ರವರ "ಅಪ್ಪಾ ಅಂದ್ರೆ ಆಕಾಶ" ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇತ್ತು.ಇಂತಹ ಕಡೆ ನಮ್ಮ ಗೆಳೆಯರ ದಂದು ಸೇರಿತ್ತು ಬಿಡಿ , ಅಲ್ಲಿ ಸೆರೆ ಸಿಕ್ಕಿದ ಕೆಲವು ದೃಶ್ಯಗಳು ಇಲ್ಲಿವೆ. ಕಾರ್ಯಕ್ರಮದ ನೋಟವನ್ನು ಹಾಸ್ಯ ದೃಷ್ಟಿಯಿಂದ ಇಲ್ಲಿ ಪ್ರಕಟಿಸಲಾಗಿದೆ ವಯಕ್ತಿಕವಾಗಿ ತಪ್ಪಾಗಿ ತೆಗೆದುಕೊಳ್ಳದೆ  ಕೇವಲ ಹಾಸ್ಯ ದೃಷ್ಟಿಯಿಂದ ಇದನ್ನು ನೋಡಿ ನಕ್ಕು ಸಂತಸ ಪಟ್ಟರೆ ಅಷ್ಟೇ ಈ ಹಾಸ್ಯ ಹೂರಣ ಸಾರ್ಥಕತೆ ಪಡೆಯುತ್ತದೆ. ಇನ್ನೇಕೆ ತಡ ಬನ್ನಿ ನಿಮಗೆ ಸ್ವಾಗತ.
| ಅಮ್ಮನ ಬಾಯಲ್ಲಿ ಸುಳ್ಳು ಹೇಳಿಸಿ ಅಪ್ಪನನ್ನು ಆಕಾಶ ಅಂತಾರೆ ಮಣಿಕಾಂತ್. | 
| ಮದುವೆ ಮನೆ ಅಲ್ಲಾ ರೀ..... ಇದು ಸರಸ್ವತಿ ಮನೆ. | 
| ಇಲ್ಲಿರುವ ಎಲ್ಲರಿಗೂ ಅವರ ಅಪ್ಪನ ಚಿಂತೆ ..........!!! | 
| ಬನ್ನಿ ಒಳಗೆ ನಿಮಗೆ ಸ್ವಾಗತ | 
| ಸುಂದರ ಹೂಗಳು ಚಿತ್ತಾರವಾಗಿ ನಗುತ್ತವೆ ....ಆದರೆ ನಾವು ............?? | 
| ಪುಸ್ತಕದ ಲೇಖಕ ಬಲಗಾಲಿಟ್ಟು ಒಳಗೆ ಬಂದರೆ ಶುಭವಂತೆ ............!!! | 
| ಲೇಖಕನಿಗೆ ಸಾಥ್ ಕೊಡಲು ಹರುಷದಿ ಬಂದ ಪತ್ನಿ ಹಾಗು ಮಗಳು. | 
| ಏನ್ ಶಿವೂ ಸಾರ್ ಇತ್ತೀಚಿಗೆ ಒಬ್ಬೊಬ್ಬರೇ ಬರ್ತಾಯಿದ್ದೀರ .... ಮೇಡಂ ಎಲ್ಲಿ.?? | 
| ನನಗೂ ನಮ್ಮ ಅಪ್ಪಾ ಅಂದ್ರೆ ಆಕಾಶ ಕಣ್ರೀ ...!! | 
| ಜೀವನದ ಪರೀಕ್ಷೆಯಲ್ಲಿ ಗೆದ್ದು ನಗೆ ಬೀರಿದ ಜನಾ ಇವರು. | 
| ಪ್ರೀತಿಯ ಅಪ್ಪುಗೆಗೆ ನಗೆಯ ಸಿಂಚನ. | 
| ಯಾಕ್ರಪ್ಪಾ ಇಬ್ಬರ ಮುಖದಲ್ಲಿ ನಗು ಇಲ್ಲಾ ಸ್ವಲ್ಪ ನಗಿ ನೋಡೋಣ. | 
| ಪ್ರಕಾಶ್ ಹೆಗ್ಡೆ ನರ್ತನಕ್ಕೆ ಸುಲತಾ ಹಾಕಿದರು ತಾಳ ಉಮೇಶ ದೇಸಾಯಿಯವರ ಗಾಯನ | 
| ಅಲ್ಲಿದೆ ಅಂತಾ ಒಬ್ಬರು ಅಂದ್ರೆ ......ಇಲ್ಲಿದೆ ಅಂತಾ ಇನ್ನೊಬ್ಬರು | 
| ಛಾಯಾಗ್ರಾಹಕನ ಸುತ್ತಾ ವಿವಿಧ ಭಾವನೆಗಳ ವೃತ್ತ | 
| ಅಕ್ಕಾ ನಿಮ್ಮಪ್ಪಾ ಅಂದ್ರೆ ಇಷ್ಟಗಲ ಆಕಾಶನ ??? | 
| ಎಲ್ಲಾ ತಿಂಡೀ ರೆಡಿನಾ ......??? | 
| ಪ್ರಕಾಶ್ ಹೆಗ್ಡೆ ಕೆಫೆಯ ಒಂದು ನೋಟ | 
| ಬಾಲಣ್ಣ ನಾನು ಈ ಸಾರಿ ಹುಷಾರ್ ಆಗಿರ್ತೇನೆ | 
| ಒಳಗೆ ಬನ್ನಿ ಸಾರ್ ಬೇಗ ..........ಕಾರ್ಯಕ್ರಮ ಶುರುವಾಗಲಿ.. | 
| ಎಲ್ಲರಿಗಿಂತ ಮೊದಲು ವೇದಿಕೆ ಏರಿದ್ದು ಈ ಅಜ್ಜಿ | 
| ಅಪ್ಪಾ ಅಂದ್ರೆ ಆಕಾಶ ಸರಿ ............ಆದರೆ ಅಜ್ಜಿ ಅಂದ್ರೆ ?? | 
| ಆಕಾಶದ ಅಪ್ಪಂದಿರ ಜೊತೆ ನೂರೆಂಟು ಸುಳ್ಳು ಹೇಳಿದ ಅಮ್ಮಂದಿರು | 
| ಲಾರೆಲ್ ಮತ್ತು ಹಾರ್ಡಿಯ ಕ್ಯಾಟ್ ವಾಕ್ | 
| ಈ ಕವಿಯ ನಗೆಯಲ್ಲಿ ಯಾವ ಕವಿತೆಯ ಹೂರಣ ಅಡಗಿದೆಯೋ ......!!!! | 
| ಹೂವಿನ ಚಿತ್ತಾರದ ಪಕ್ಕ ಹೂ ಮನಸಿನ ಬದರೀ ನಾಥ್ | 
| ನಾನು ಮಾಯವಾಗಿದ್ದ ದಿನಗಳ ಬಗ್ಗೆ ಕೇಳಬೇಡಿ ಪ್ಲೀಸ್ ಅಂದ್ರೂ ಪ್ರದೀಪ್ ರಾವ್ | 
| ನೋಡೀ ಸಾರ್ ಇವರು ನಿಮ್ಮ ಕ್ಯಾಮರಾಗೆ ಮುಖ ತೋರಿಸಲ್ವಂತೆ. | 
| ಶ್ರೀಕಾಂತ್ ನಿಮ್ಮ ಕಾಂತೆ ಅಲ್ಲಿಲ್ಲ ಈ ಕಡೆ ನೋಡೀ ಸಾರ್ | 
| ನಾವ್ ನಗೊದೆ ಹೀಗೆ ಸಾರ್ | 
| ಡೈರೆಕ್ಟರ್ ಸಾಹೇಬ್ರೆ ಯಾಕೆ ಇಷ್ಟು ಸೀರಿಯಸ್ಸು ... ಸ್ವಲ್ಪ ನಗೀ ಪ್ಲೀಸ್ | 
| ನಾಲ್ಕು ಜ್ಞಾನಿಗಳ ಜೊತೆ ಒಬ್ಬ ಪೆದ್ದ [ ನೀಲಿ ಟೀ ಶರ್ಟ್ ಹಾಕಿದವ ] | 
| ಎರಡು ನಗು ನಡುವೆ ಮುಗುಳ್ ನಗು ಪಕ್ಕದಲ್ಲಿ ಎರಡು ಸೀರಿಯಸ್ಸು | 
| ತಿನ್ನೋದ್ರಲ್ಲಿ ನಾನೇ ಫಾಸ್ಟು ... ಇವರು ತುಂಬಾ ಸ್ಲೋ ಗೊತ್ತ | 
| ಮುಷ್ಠಿ ಬಿಗೀ ಹಿಡಿದು ಮಾತಾಡೋದು ಹೀಗೆ ಗೊತ್ತ ಅಂದ್ರು ಡೈರೆಕ್ಟರ್ | 
| ಏನ್ರೀ ಕೈತುಂಬಾ ಇಷ್ಟೊಂದು ... ನಮಗೂ ಸ್ವಲ್ಪ ಕೊಡಿ. | 
| ನಕ್ಕರೆ ಅದೇ ಸ್ವರ್ಗ | 
| ಐದು ಮಂದಿಯ ಐದು ಬಗೆಯ ಸಂತಸದ ಭಾವನೆಗಳ ಅನಾವರಣ. | 
| ಮೊಬೈಲ್ ನಲ್ಲಿ ಅಳುತ್ತಾ ಮಾತಾಡೋದು ಹೀಗೆ ಗೊತ್ತ ...!! | 
| ಸ್ಮೈಲ್ ಪ್ಲೀಸ್ .......ಅಂಡ್ ಸ್ಟೈಲ್ ಪ್ಲೀಸ್ ........ಪ್ರಕಾಶಣ್ಣ ಫೋಟೋ ತೆಗೀತಾರೆ. | 
| ವಿವಿಧ ಗಾತ್ರದ ಅಕ್ಷರ ಪ್ರಿಯರು | 
| ಹಿಂಗೆ ಸೀರಿಯಸ್ಸಾಗಿ ನಿಂತರೆ ಫೋಟೋ ತೆಗೆಯೋದು ಹೇಗೆ ಮಾರಾಯ್ರೇ | 
| ಪ್ರಕಾಶಣ್ಣನ ತುಂಟ ಕ್ಯಾಮರ ಮಾಡಿದೆ ಚೇಷ್ಟೆ | 
ನಿ
| ಅಶೋಕ್ ಶೆಟ್ಟಿ ಯವರ ಮುಂಬೈ ನಗು | 
| ಪಾಪ ತುಂಟ ಮಕ್ಕಳು ಚೇಷ್ಟೆ ಮಾಡಿ ಕೊಳ್ಳಲಿ ಬಿಡಿ. | 
| ಚೇಷ್ಟೆ ಮಾಡಿ ಸುಸ್ತಾದ ಮುದ್ದು ಮಕ್ಕಳು. | 
| ಇವರಿಬ್ಬರಲ್ಲಿ ನಕ್ಕವರು ಯಾರು ??? ಹೇಳಿದ್ರೆ ಬಹುಮಾನ ಉಂಟು. | 
| ನಗೆಯ ಸಂಚು ನಡೆದಿದೆ ಇಲ್ಲಿ. | 
| ಇವರ ಹಾಡಿಗೆ ತಲೆದೂಗದವರು ಯಾರು ?? | 
| ನಟಿ ಭಾವನ ರವರ ಭಾವನೆ ಮೂಡಿದ್ದು ಹೀಗೆ. | 
| ಅಪ್ಪಾ ಇವರೆಲ್ಲಾ ಯಾರಪ್ಪ .....??? | 
| ಮನದಾಳದ ಭಾವನೆ ತುಂಬಿದ ಗಾಯನ ಇವರದ್ದು | 
| ಜ್ಞಾನದ, ಪ್ರೀತಿಯ ನಗೆಯ ದೀಪ ಬೆಳಗೋಣ ಬನ್ನಿ | 
| ಎರಡು ಅದ್ಭತ ಪ್ರತಿಭೆಗಳ ಸಮಾಗಮ. | 
| ಹಲೋ ಕಾರ್ಯಕ್ರಮ ಶುರು ಆಯ್ತು. ನಿಮ್ಮೆಲ್ಲರಿಗೂ ಸ್ವಾಗತ. | 
| ನಟಿ ಹಾಗು ಪತ್ರಕರ್ತರ ನಡುವೆ ಪುಸ್ತಕ ಅಪ್ಪಿದ ಪ್ರೀತಿಯ ಮಹಾ ಕವಿ | 
| ನಗು ನಗುತ್ತಾ ಜ್ಞಾನದ ಜ್ಯೋತಿ ಬೆಳಗೋಣ ಬನ್ನಿ | 
| ಕನ್ನಡ ತಾಯಿಯ ಹೆಮ್ಮೆಯ ಮಕ್ಕಳು ಇವರು. | 
| ನಾವು ಬಿಡುಗಡೆ ಮಾಡಿದ್ದು ಇದೆ ಪುಸ್ತಕ ಕಣ್ರೀ ಆದರೆ..........ಶೇರ್ ಮಾಡದೆ ಕೊಂಡು ಓದಿ ಪ್ಲೀಸ್ . | 
| ನಗು ಆರೋಗ್ಯಕ್ಕೆ ಒಳ್ಳೆಯದು | 
| ಜೀವನ ಗೆದ್ದ ಜೋಡಿಗೆ ಉಗೆ........ ಉಗೆ .... ಜೈ ಜೈ ಹೊ | 
| ಕತ್ತಲೆಯ ಜೀವನಕ್ಕೆ ಬೆಳಕು ಮೂಡಿಸಿದ ಗುರು, ಹಾಗು ಬೆಳಕು ಪಡೆದುಸಾಧನೆಯ ಶಿಖರ ಏರಿದ ಶಿಷ್ಯ | 
| ಭೇಷ್ ಕಣ್ರೀ ನಿಮ್ಮ ಸಾಧನೆ ಇತರರಿಗೆ ಮಾದರಿ. | 
| ನಿಮ್ಮಂತವರ ಸಾಧನೆ ಸಮಾಜಕ್ಕೆ ಅದ್ಭತ ಕೊಡುಗೆ ಕಣ್ರೀ | 
| ಒಳ್ಳೆಯ ಮನಸು ಒಳ್ಳೆಯ ಭಾವನೆ. ವ್ಯಕ್ತ ಆಗೋದು ಹೀಗೆ | 
| ಕನ್ನಡ ತಾಯಿಯ ಮಗಳು. | 
| ವಿಶ್ವೇಶ್ವರ ಭಟ್ಟರು ನೀರು ಕುಡಿಯೋದನ್ನು ನನ್ನ ಯಾವ ಚಿತ್ರಕ್ಕೆ ಬಳಸಿಕೊಳ್ಳಲಿ ಅಂತಾ ಗುರುಪ್ರಸಾದ್ ಯೋಚಿಸಿದ್ದು ಹೀಗೆ. | 
| ವೇದಿಕೆಯಲ್ಲಿ ಯಾವರೀತಿ ಮಾತನಾಡಲಿ ಅಂತಾ ಡೈರೆಕ್ಟರ್ ಸ್ಕೆಚ್ ಹಾಕಿದ್ದು ಹೀಗೆ. | 
| ಪತ್ರಕರ್ತರು ಪಕ್ಕದಲ್ಲಿದ್ದಾಗ ಪ್ರಾಣಾಯಾಮ ಮಾಡೋದು ಒಳ್ಳೆಯದು ಅಂದ್ರೂ ಗುರುಪ್ರಸಾದ್. | 
| ಹಳೆಯಕಾಲದ ಚಲನ ಚಿತ್ರಗಳಲ್ಲಿ ಭಾವನ ಇದ್ದಿದ್ದರೆ ಹೀಗೆ ಕಾಣ್ತಿದ್ರು | 
| ಹಳೆಯಕಾಲದ ಕಪ್ಪು ಬಿಳುಪಿನ ಚಲನಚಿತ್ರಗಳಲ್ಲಿ ನಟಿ ಭಾವನ ಅವರು ಇದ್ದಿದ್ರೆ ....!! | 
| ಹಾಡಿದೆ ಮಿಡುಕಾಡಿದೆ ಹೃದಯ ವೀಣೆಯೊಳಗೆ | 
| ಛಾಯಾ ಚಿತ್ತಾರ ಇಲ್ಲಿದೆ ನೋಡಿ | 
| ಇವರ ಹೃದಯ ತುಂಬಿ ಬಂಡ ಮಾತುಗಳು ಕಣ್ಣಲ್ಲಿ ನೀರು ಬರಿಸಿದವು. | 
| ಎಲ್ಲರ ಗಮನವೂ ಒಂದೇ ಕಡೆ ....!!! | 
| ಈ ಕನ್ನಡ ಮಣ್ಣಿನ ಮಗನ ಮಾತು ಅದ್ಭುತ ಕಣ್ರೀ | 
| ಈ ಬಾಟಲ್ ನಂದು ಮೇಡಂ ಅಲ್ಲೇ ಇರಲಿ ಬಿಡಿ. | 
| ಕನ್ನಡಿಗನ ಚಪ್ಪಾಳೆಯ ವಿಶ್ವರೂಪ ದರ್ಶನ | 
| ಭಾವನ ಪಕ್ಕ ಕೂರುವ ಆಸೆಗೆ ತಣ್ಣೀರ್ ಎರಚಿ ವಂಚಿಸಿದ ಮಣಿಕಾಂತ್ ಗೆ ಪ್ರೀತಿಯ ಶಾಪ ಗಳು | 
| "ಅಪ್ಪಾ ಅಂದ್ರೆ ಆಕಾಶ "ಪುಸ್ತಕಕ್ಕೆ ತನ್ನಪ್ಪನ ಪ್ರೀತಿಯ ಕಾಣಿಕೆ ನೀಡಿದ ಗುರುಪ್ರಸಾದ್ | 
| ಮಣಿಕಾಂತ್ ನಿಮಗೆ ಗುರುಪ್ರಸಾದ್ ಶಾಪ ಹಾಕ್ತಿದ್ದಾರೆ ಗೊತ್ತಾ??ಅಂದ್ರು ಭಾವನ. | 
| ನಮ್ಮೊಡನೆ ಈ ಹೊತ್ತು ಜಗವೆಲ್ಲಾ ಸಾಗಿರಲು. | 
| ನನ್ನ ಮುಂದಿನ ಹೆಜ್ಜೆಗಳಿಗೆ ನಿಮ್ಮ ಪ್ರೀತಿಯ ಹಾರೈಕೆಇರಲಿ. | 
| ಮೊರೆದಿದೆ ತೊರೆ ಹರಿದಿದೆ ತುಂಬಿದಂತೆ ಬಾಳು. | 
| ಜನಗಳ ಮನ ಅರಿತ ಭಟ್ಟರು ಆಡಿದ ಪ್ರೀತಿಯ ಮಾತುಗಳು. | 
| ಆತ್ಮೀಯ ಲೇಖಕನಿಗೆ ಪ್ರೀತಿಯ ಸನ್ಮಾನ. | 
| ಪ್ರೀತಿ ತುಂಬಿದ ಆ ಕ್ಷಣಗಳು | 
| ಗಿರೀಶ್ ಸೋಮಶೇಖರ್ ರಚಿಸಿದ ಪುಸ್ತಕದ ಚಿತ್ತಾರ. | 
| ಇವ್ರು ನಮ್ಮಮ್ಮ ಗೊತ್ತಾ ?? | 
| ಪ್ರೀತಿಯ ನಿರ್ದೇಶಕರನ್ನು ನಿರ್ದೇಶಿಸುತ್ತಿರುವ ಅಭಿಮಾನಿಗಳು. | 
| ಹೂವಿನ ಚಿತ್ತಾರಕ್ಕೆ ಹೂಮನಸಿನ ಮಕ್ಕಳ ಚಿತ್ತಾರದ ಅಲಂಕಾರ | 
| ಇಬ್ಬರು ತುಂಟ ಹುಡುಗರು | 
| ಕದ್ದು ಫೋಟೋ ತೆಗ್ಯೋದು ಹೀಗೆ ಗೊತ್ತ ?? | 
| ಪ್ರದೀಪ್ ಮತ್ತೆ ಯಾವಾಗ ಮಾಯ ಆಗ್ತೀರ ? | 
| ರೀ ಸರಿಯಾಗಿ ಫೋಟೋ ಕ್ಲಿಕ್ ಮಾಡಿಯಪ್ಪ ...!!! | 
| ಫೋಟೋ ಸರಿಯಾಗಿ ಬಂತಾ ಪ್ರಕಾಶಣ್ಣ. | 
| ದೇವರೇ ಇವರ ಜ್ಞಾನದ ಬೆಳಕು ನನ್ನ ಮೇಲೂ ಬೀಳಲಿ. | 
| ಪ್ರೀತಿಯ ಲೋಕಕ್ಕೆ ಆತ್ಮ ಸಾಕ್ಷಿ ಎಂಬ ನಾಯಿಯ ಕಾವಲು. | 
| ನಾಡಿನ ಹೆಮ್ಮೆಯ ತುಂಟ ಕವಿಯ[ಬಿ.ಆರ್.ಲಕ್ಷ್ಮಣ್ ರಾವ್ ] ಜೊತೆ ತುಂಟ ಹುಡುಗ ಸತೀಶ್ | 
| ಸಾಧಕರ ಜೊತೆಯಲ್ಲಿ ಮೈಸೂರಿನ ಪೆದ್ದ ಹೈದ | 
| ನನಗೆ ಸಿಕ್ಕ ಜೀವನದ ಅದ್ಭತ ಕೊಡುಗೆಗಳು ಇವರು [ ನೀಲಿ ಬಣ್ಣದ ಟೀ ಶರ್ಟ್ ನವನನ್ನು ಬಿಟ್ಟು ] | 
| ಗುಟ್ಟೊಂದ ಹೇಳುವೆ ಹತ್ತಿರ ಹತ್ತಿರ ಬಾ | 
| ಪ್ರೀತಿ ತುಂಬಿದ ಆನಂದಮಯ ಈ ಸಂಸಾರ | 
| ಮಣಿಕಾಂತ್ ಸಂಸಾರಕ್ಕೆ ಒಳ್ಳೆಯದಾಗಲಿ ಅಂದ್ರು ಗೋಪಾಲ್ ವಾಜಪೇಯಿ | 
| ಈಗ ಗೊತ್ತಾಯ್ತಾ "ನಮ್ಮಪ್ಪ ಅಂದ್ರೆ ಆಕಾಶ" | 
 ಇವಿಷ್ಟು  ನನಗೆ ಸಿಕ್ಕ ಚಿತ್ರಗಳು ನಿಮಗೆ ಸಂತೋಷ  ಆಗಿದ್ರೆ ಕಾಮೆಂಟ್ ಹಾಕಲು ಮರೆಯ ಬೇಡಿ.