ಕಳೆದ ಭಾನುವಾರ ೧೭-೦೨ ೨೦೦೩ ರಂದು ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಆತ್ಮೀಯ ಗೆಳೆಯ ಶ್ರೀ ಮಣಿಕಾಂತ್ ರವರ "ಅಪ್ಪಾ ಅಂದ್ರೆ ಆಕಾಶ" ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇತ್ತು.ಇಂತಹ ಕಡೆ ನಮ್ಮ ಗೆಳೆಯರ ದಂದು ಸೇರಿತ್ತು ಬಿಡಿ , ಅಲ್ಲಿ ಸೆರೆ ಸಿಕ್ಕಿದ ಕೆಲವು ದೃಶ್ಯಗಳು ಇಲ್ಲಿವೆ. ಕಾರ್ಯಕ್ರಮದ ನೋಟವನ್ನು ಹಾಸ್ಯ ದೃಷ್ಟಿಯಿಂದ ಇಲ್ಲಿ ಪ್ರಕಟಿಸಲಾಗಿದೆ ವಯಕ್ತಿಕವಾಗಿ ತಪ್ಪಾಗಿ ತೆಗೆದುಕೊಳ್ಳದೆ ಕೇವಲ ಹಾಸ್ಯ ದೃಷ್ಟಿಯಿಂದ ಇದನ್ನು ನೋಡಿ ನಕ್ಕು ಸಂತಸ ಪಟ್ಟರೆ ಅಷ್ಟೇ ಈ ಹಾಸ್ಯ ಹೂರಣ ಸಾರ್ಥಕತೆ ಪಡೆಯುತ್ತದೆ. ಇನ್ನೇಕೆ ತಡ ಬನ್ನಿ ನಿಮಗೆ ಸ್ವಾಗತ.
| ಅಮ್ಮನ ಬಾಯಲ್ಲಿ ಸುಳ್ಳು ಹೇಳಿಸಿ ಅಪ್ಪನನ್ನು ಆಕಾಶ ಅಂತಾರೆ ಮಣಿಕಾಂತ್. |
| ಮದುವೆ ಮನೆ ಅಲ್ಲಾ ರೀ..... ಇದು ಸರಸ್ವತಿ ಮನೆ. |
| ಇಲ್ಲಿರುವ ಎಲ್ಲರಿಗೂ ಅವರ ಅಪ್ಪನ ಚಿಂತೆ ..........!!! |
| ಬನ್ನಿ ಒಳಗೆ ನಿಮಗೆ ಸ್ವಾಗತ |
| ಸುಂದರ ಹೂಗಳು ಚಿತ್ತಾರವಾಗಿ ನಗುತ್ತವೆ ....ಆದರೆ ನಾವು ............?? |
| ಪುಸ್ತಕದ ಲೇಖಕ ಬಲಗಾಲಿಟ್ಟು ಒಳಗೆ ಬಂದರೆ ಶುಭವಂತೆ ............!!! |
| ಲೇಖಕನಿಗೆ ಸಾಥ್ ಕೊಡಲು ಹರುಷದಿ ಬಂದ ಪತ್ನಿ ಹಾಗು ಮಗಳು. |
| ಏನ್ ಶಿವೂ ಸಾರ್ ಇತ್ತೀಚಿಗೆ ಒಬ್ಬೊಬ್ಬರೇ ಬರ್ತಾಯಿದ್ದೀರ .... ಮೇಡಂ ಎಲ್ಲಿ.?? |
| ನನಗೂ ನಮ್ಮ ಅಪ್ಪಾ ಅಂದ್ರೆ ಆಕಾಶ ಕಣ್ರೀ ...!! |
| ಜೀವನದ ಪರೀಕ್ಷೆಯಲ್ಲಿ ಗೆದ್ದು ನಗೆ ಬೀರಿದ ಜನಾ ಇವರು. |
| ಪ್ರೀತಿಯ ಅಪ್ಪುಗೆಗೆ ನಗೆಯ ಸಿಂಚನ. |
| ಯಾಕ್ರಪ್ಪಾ ಇಬ್ಬರ ಮುಖದಲ್ಲಿ ನಗು ಇಲ್ಲಾ ಸ್ವಲ್ಪ ನಗಿ ನೋಡೋಣ. |
| ಪ್ರಕಾಶ್ ಹೆಗ್ಡೆ ನರ್ತನಕ್ಕೆ ಸುಲತಾ ಹಾಕಿದರು ತಾಳ ಉಮೇಶ ದೇಸಾಯಿಯವರ ಗಾಯನ |
| ಅಲ್ಲಿದೆ ಅಂತಾ ಒಬ್ಬರು ಅಂದ್ರೆ ......ಇಲ್ಲಿದೆ ಅಂತಾ ಇನ್ನೊಬ್ಬರು |
| ಛಾಯಾಗ್ರಾಹಕನ ಸುತ್ತಾ ವಿವಿಧ ಭಾವನೆಗಳ ವೃತ್ತ |
| ಅಕ್ಕಾ ನಿಮ್ಮಪ್ಪಾ ಅಂದ್ರೆ ಇಷ್ಟಗಲ ಆಕಾಶನ ??? |
| ಎಲ್ಲಾ ತಿಂಡೀ ರೆಡಿನಾ ......??? |
| ಪ್ರಕಾಶ್ ಹೆಗ್ಡೆ ಕೆಫೆಯ ಒಂದು ನೋಟ |
| ಬಾಲಣ್ಣ ನಾನು ಈ ಸಾರಿ ಹುಷಾರ್ ಆಗಿರ್ತೇನೆ |
| ಒಳಗೆ ಬನ್ನಿ ಸಾರ್ ಬೇಗ ..........ಕಾರ್ಯಕ್ರಮ ಶುರುವಾಗಲಿ.. |
| ಎಲ್ಲರಿಗಿಂತ ಮೊದಲು ವೇದಿಕೆ ಏರಿದ್ದು ಈ ಅಜ್ಜಿ |
| ಅಪ್ಪಾ ಅಂದ್ರೆ ಆಕಾಶ ಸರಿ ............ಆದರೆ ಅಜ್ಜಿ ಅಂದ್ರೆ ?? |
| ಆಕಾಶದ ಅಪ್ಪಂದಿರ ಜೊತೆ ನೂರೆಂಟು ಸುಳ್ಳು ಹೇಳಿದ ಅಮ್ಮಂದಿರು |
| ಲಾರೆಲ್ ಮತ್ತು ಹಾರ್ಡಿಯ ಕ್ಯಾಟ್ ವಾಕ್ |
| ಈ ಕವಿಯ ನಗೆಯಲ್ಲಿ ಯಾವ ಕವಿತೆಯ ಹೂರಣ ಅಡಗಿದೆಯೋ ......!!!! |
| ಹೂವಿನ ಚಿತ್ತಾರದ ಪಕ್ಕ ಹೂ ಮನಸಿನ ಬದರೀ ನಾಥ್ |
| ನಾನು ಮಾಯವಾಗಿದ್ದ ದಿನಗಳ ಬಗ್ಗೆ ಕೇಳಬೇಡಿ ಪ್ಲೀಸ್ ಅಂದ್ರೂ ಪ್ರದೀಪ್ ರಾವ್ |
| ನೋಡೀ ಸಾರ್ ಇವರು ನಿಮ್ಮ ಕ್ಯಾಮರಾಗೆ ಮುಖ ತೋರಿಸಲ್ವಂತೆ. |
| ಶ್ರೀಕಾಂತ್ ನಿಮ್ಮ ಕಾಂತೆ ಅಲ್ಲಿಲ್ಲ ಈ ಕಡೆ ನೋಡೀ ಸಾರ್ |
| ನಾವ್ ನಗೊದೆ ಹೀಗೆ ಸಾರ್ |
| ಡೈರೆಕ್ಟರ್ ಸಾಹೇಬ್ರೆ ಯಾಕೆ ಇಷ್ಟು ಸೀರಿಯಸ್ಸು ... ಸ್ವಲ್ಪ ನಗೀ ಪ್ಲೀಸ್ |
| ನಾಲ್ಕು ಜ್ಞಾನಿಗಳ ಜೊತೆ ಒಬ್ಬ ಪೆದ್ದ [ ನೀಲಿ ಟೀ ಶರ್ಟ್ ಹಾಕಿದವ ] |
| ಎರಡು ನಗು ನಡುವೆ ಮುಗುಳ್ ನಗು ಪಕ್ಕದಲ್ಲಿ ಎರಡು ಸೀರಿಯಸ್ಸು |
| ತಿನ್ನೋದ್ರಲ್ಲಿ ನಾನೇ ಫಾಸ್ಟು ... ಇವರು ತುಂಬಾ ಸ್ಲೋ ಗೊತ್ತ |
| ಮುಷ್ಠಿ ಬಿಗೀ ಹಿಡಿದು ಮಾತಾಡೋದು ಹೀಗೆ ಗೊತ್ತ ಅಂದ್ರು ಡೈರೆಕ್ಟರ್ |
| ಏನ್ರೀ ಕೈತುಂಬಾ ಇಷ್ಟೊಂದು ... ನಮಗೂ ಸ್ವಲ್ಪ ಕೊಡಿ. |
| ನಕ್ಕರೆ ಅದೇ ಸ್ವರ್ಗ |
| ಐದು ಮಂದಿಯ ಐದು ಬಗೆಯ ಸಂತಸದ ಭಾವನೆಗಳ ಅನಾವರಣ. |
| ಮೊಬೈಲ್ ನಲ್ಲಿ ಅಳುತ್ತಾ ಮಾತಾಡೋದು ಹೀಗೆ ಗೊತ್ತ ...!! |
| ಸ್ಮೈಲ್ ಪ್ಲೀಸ್ .......ಅಂಡ್ ಸ್ಟೈಲ್ ಪ್ಲೀಸ್ ........ಪ್ರಕಾಶಣ್ಣ ಫೋಟೋ ತೆಗೀತಾರೆ. |
| ವಿವಿಧ ಗಾತ್ರದ ಅಕ್ಷರ ಪ್ರಿಯರು |
| ಹಿಂಗೆ ಸೀರಿಯಸ್ಸಾಗಿ ನಿಂತರೆ ಫೋಟೋ ತೆಗೆಯೋದು ಹೇಗೆ ಮಾರಾಯ್ರೇ |
| ಪ್ರಕಾಶಣ್ಣನ ತುಂಟ ಕ್ಯಾಮರ ಮಾಡಿದೆ ಚೇಷ್ಟೆ |
ನಿ
| ಅಶೋಕ್ ಶೆಟ್ಟಿ ಯವರ ಮುಂಬೈ ನಗು |
| ಪಾಪ ತುಂಟ ಮಕ್ಕಳು ಚೇಷ್ಟೆ ಮಾಡಿ ಕೊಳ್ಳಲಿ ಬಿಡಿ. |
| ಚೇಷ್ಟೆ ಮಾಡಿ ಸುಸ್ತಾದ ಮುದ್ದು ಮಕ್ಕಳು. |
| ಇವರಿಬ್ಬರಲ್ಲಿ ನಕ್ಕವರು ಯಾರು ??? ಹೇಳಿದ್ರೆ ಬಹುಮಾನ ಉಂಟು. |
| ನಗೆಯ ಸಂಚು ನಡೆದಿದೆ ಇಲ್ಲಿ. |
| ಇವರ ಹಾಡಿಗೆ ತಲೆದೂಗದವರು ಯಾರು ?? |
| ನಟಿ ಭಾವನ ರವರ ಭಾವನೆ ಮೂಡಿದ್ದು ಹೀಗೆ. |
| ಅಪ್ಪಾ ಇವರೆಲ್ಲಾ ಯಾರಪ್ಪ .....??? |
| ಮನದಾಳದ ಭಾವನೆ ತುಂಬಿದ ಗಾಯನ ಇವರದ್ದು |
| ಜ್ಞಾನದ, ಪ್ರೀತಿಯ ನಗೆಯ ದೀಪ ಬೆಳಗೋಣ ಬನ್ನಿ |
| ಎರಡು ಅದ್ಭತ ಪ್ರತಿಭೆಗಳ ಸಮಾಗಮ. |
| ಹಲೋ ಕಾರ್ಯಕ್ರಮ ಶುರು ಆಯ್ತು. ನಿಮ್ಮೆಲ್ಲರಿಗೂ ಸ್ವಾಗತ. |
| ನಟಿ ಹಾಗು ಪತ್ರಕರ್ತರ ನಡುವೆ ಪುಸ್ತಕ ಅಪ್ಪಿದ ಪ್ರೀತಿಯ ಮಹಾ ಕವಿ |
| ನಗು ನಗುತ್ತಾ ಜ್ಞಾನದ ಜ್ಯೋತಿ ಬೆಳಗೋಣ ಬನ್ನಿ |
| ಕನ್ನಡ ತಾಯಿಯ ಹೆಮ್ಮೆಯ ಮಕ್ಕಳು ಇವರು. |
| ನಾವು ಬಿಡುಗಡೆ ಮಾಡಿದ್ದು ಇದೆ ಪುಸ್ತಕ ಕಣ್ರೀ ಆದರೆ..........ಶೇರ್ ಮಾಡದೆ ಕೊಂಡು ಓದಿ ಪ್ಲೀಸ್ . |
| ನಗು ಆರೋಗ್ಯಕ್ಕೆ ಒಳ್ಳೆಯದು |
| ಜೀವನ ಗೆದ್ದ ಜೋಡಿಗೆ ಉಗೆ........ ಉಗೆ .... ಜೈ ಜೈ ಹೊ |
| ಕತ್ತಲೆಯ ಜೀವನಕ್ಕೆ ಬೆಳಕು ಮೂಡಿಸಿದ ಗುರು, ಹಾಗು ಬೆಳಕು ಪಡೆದುಸಾಧನೆಯ ಶಿಖರ ಏರಿದ ಶಿಷ್ಯ |
| ಭೇಷ್ ಕಣ್ರೀ ನಿಮ್ಮ ಸಾಧನೆ ಇತರರಿಗೆ ಮಾದರಿ. |
| ನಿಮ್ಮಂತವರ ಸಾಧನೆ ಸಮಾಜಕ್ಕೆ ಅದ್ಭತ ಕೊಡುಗೆ ಕಣ್ರೀ |
| ಒಳ್ಳೆಯ ಮನಸು ಒಳ್ಳೆಯ ಭಾವನೆ. ವ್ಯಕ್ತ ಆಗೋದು ಹೀಗೆ |
| ಕನ್ನಡ ತಾಯಿಯ ಮಗಳು. |
| ವಿಶ್ವೇಶ್ವರ ಭಟ್ಟರು ನೀರು ಕುಡಿಯೋದನ್ನು ನನ್ನ ಯಾವ ಚಿತ್ರಕ್ಕೆ ಬಳಸಿಕೊಳ್ಳಲಿ ಅಂತಾ ಗುರುಪ್ರಸಾದ್ ಯೋಚಿಸಿದ್ದು ಹೀಗೆ. |
| ವೇದಿಕೆಯಲ್ಲಿ ಯಾವರೀತಿ ಮಾತನಾಡಲಿ ಅಂತಾ ಡೈರೆಕ್ಟರ್ ಸ್ಕೆಚ್ ಹಾಕಿದ್ದು ಹೀಗೆ. |
| ಪತ್ರಕರ್ತರು ಪಕ್ಕದಲ್ಲಿದ್ದಾಗ ಪ್ರಾಣಾಯಾಮ ಮಾಡೋದು ಒಳ್ಳೆಯದು ಅಂದ್ರೂ ಗುರುಪ್ರಸಾದ್. |
| ಹಳೆಯಕಾಲದ ಚಲನ ಚಿತ್ರಗಳಲ್ಲಿ ಭಾವನ ಇದ್ದಿದ್ದರೆ ಹೀಗೆ ಕಾಣ್ತಿದ್ರು |
| ಹಳೆಯಕಾಲದ ಕಪ್ಪು ಬಿಳುಪಿನ ಚಲನಚಿತ್ರಗಳಲ್ಲಿ ನಟಿ ಭಾವನ ಅವರು ಇದ್ದಿದ್ರೆ ....!! |
| ಹಾಡಿದೆ ಮಿಡುಕಾಡಿದೆ ಹೃದಯ ವೀಣೆಯೊಳಗೆ |
| ಛಾಯಾ ಚಿತ್ತಾರ ಇಲ್ಲಿದೆ ನೋಡಿ |
| ಇವರ ಹೃದಯ ತುಂಬಿ ಬಂಡ ಮಾತುಗಳು ಕಣ್ಣಲ್ಲಿ ನೀರು ಬರಿಸಿದವು. |
| ಎಲ್ಲರ ಗಮನವೂ ಒಂದೇ ಕಡೆ ....!!! |
| ಈ ಕನ್ನಡ ಮಣ್ಣಿನ ಮಗನ ಮಾತು ಅದ್ಭುತ ಕಣ್ರೀ |
| ಈ ಬಾಟಲ್ ನಂದು ಮೇಡಂ ಅಲ್ಲೇ ಇರಲಿ ಬಿಡಿ. |
| ಕನ್ನಡಿಗನ ಚಪ್ಪಾಳೆಯ ವಿಶ್ವರೂಪ ದರ್ಶನ |
| ಭಾವನ ಪಕ್ಕ ಕೂರುವ ಆಸೆಗೆ ತಣ್ಣೀರ್ ಎರಚಿ ವಂಚಿಸಿದ ಮಣಿಕಾಂತ್ ಗೆ ಪ್ರೀತಿಯ ಶಾಪ ಗಳು |
| "ಅಪ್ಪಾ ಅಂದ್ರೆ ಆಕಾಶ "ಪುಸ್ತಕಕ್ಕೆ ತನ್ನಪ್ಪನ ಪ್ರೀತಿಯ ಕಾಣಿಕೆ ನೀಡಿದ ಗುರುಪ್ರಸಾದ್ |
| ಮಣಿಕಾಂತ್ ನಿಮಗೆ ಗುರುಪ್ರಸಾದ್ ಶಾಪ ಹಾಕ್ತಿದ್ದಾರೆ ಗೊತ್ತಾ??ಅಂದ್ರು ಭಾವನ. |
| ನಮ್ಮೊಡನೆ ಈ ಹೊತ್ತು ಜಗವೆಲ್ಲಾ ಸಾಗಿರಲು. |
| ನನ್ನ ಮುಂದಿನ ಹೆಜ್ಜೆಗಳಿಗೆ ನಿಮ್ಮ ಪ್ರೀತಿಯ ಹಾರೈಕೆಇರಲಿ. |
| ಮೊರೆದಿದೆ ತೊರೆ ಹರಿದಿದೆ ತುಂಬಿದಂತೆ ಬಾಳು. |
| ಜನಗಳ ಮನ ಅರಿತ ಭಟ್ಟರು ಆಡಿದ ಪ್ರೀತಿಯ ಮಾತುಗಳು. |
| ಆತ್ಮೀಯ ಲೇಖಕನಿಗೆ ಪ್ರೀತಿಯ ಸನ್ಮಾನ. |
| ಪ್ರೀತಿ ತುಂಬಿದ ಆ ಕ್ಷಣಗಳು |
| ಗಿರೀಶ್ ಸೋಮಶೇಖರ್ ರಚಿಸಿದ ಪುಸ್ತಕದ ಚಿತ್ತಾರ. |
| ಇವ್ರು ನಮ್ಮಮ್ಮ ಗೊತ್ತಾ ?? |
| ಪ್ರೀತಿಯ ನಿರ್ದೇಶಕರನ್ನು ನಿರ್ದೇಶಿಸುತ್ತಿರುವ ಅಭಿಮಾನಿಗಳು. |
| ಹೂವಿನ ಚಿತ್ತಾರಕ್ಕೆ ಹೂಮನಸಿನ ಮಕ್ಕಳ ಚಿತ್ತಾರದ ಅಲಂಕಾರ |
| ಇಬ್ಬರು ತುಂಟ ಹುಡುಗರು |
| ಕದ್ದು ಫೋಟೋ ತೆಗ್ಯೋದು ಹೀಗೆ ಗೊತ್ತ ?? |
| ಪ್ರದೀಪ್ ಮತ್ತೆ ಯಾವಾಗ ಮಾಯ ಆಗ್ತೀರ ? |
| ರೀ ಸರಿಯಾಗಿ ಫೋಟೋ ಕ್ಲಿಕ್ ಮಾಡಿಯಪ್ಪ ...!!! |
| ಫೋಟೋ ಸರಿಯಾಗಿ ಬಂತಾ ಪ್ರಕಾಶಣ್ಣ. |
| ದೇವರೇ ಇವರ ಜ್ಞಾನದ ಬೆಳಕು ನನ್ನ ಮೇಲೂ ಬೀಳಲಿ. |
| ಪ್ರೀತಿಯ ಲೋಕಕ್ಕೆ ಆತ್ಮ ಸಾಕ್ಷಿ ಎಂಬ ನಾಯಿಯ ಕಾವಲು. |
| ನಾಡಿನ ಹೆಮ್ಮೆಯ ತುಂಟ ಕವಿಯ[ಬಿ.ಆರ್.ಲಕ್ಷ್ಮಣ್ ರಾವ್ ] ಜೊತೆ ತುಂಟ ಹುಡುಗ ಸತೀಶ್ |
| ಸಾಧಕರ ಜೊತೆಯಲ್ಲಿ ಮೈಸೂರಿನ ಪೆದ್ದ ಹೈದ |
| ನನಗೆ ಸಿಕ್ಕ ಜೀವನದ ಅದ್ಭತ ಕೊಡುಗೆಗಳು ಇವರು [ ನೀಲಿ ಬಣ್ಣದ ಟೀ ಶರ್ಟ್ ನವನನ್ನು ಬಿಟ್ಟು ] |
| ಗುಟ್ಟೊಂದ ಹೇಳುವೆ ಹತ್ತಿರ ಹತ್ತಿರ ಬಾ |
| ಪ್ರೀತಿ ತುಂಬಿದ ಆನಂದಮಯ ಈ ಸಂಸಾರ |
| ಮಣಿಕಾಂತ್ ಸಂಸಾರಕ್ಕೆ ಒಳ್ಳೆಯದಾಗಲಿ ಅಂದ್ರು ಗೋಪಾಲ್ ವಾಜಪೇಯಿ |
| ಈಗ ಗೊತ್ತಾಯ್ತಾ "ನಮ್ಮಪ್ಪ ಅಂದ್ರೆ ಆಕಾಶ" |
ಇವಿಷ್ಟು ನನಗೆ ಸಿಕ್ಕ ಚಿತ್ರಗಳು ನಿಮಗೆ ಸಂತೋಷ ಆಗಿದ್ರೆ ಕಾಮೆಂಟ್ ಹಾಕಲು ಮರೆಯ ಬೇಡಿ.